Karada Vishwa

Article · April 30, 2026

ಏಳ್ಗೆಯಾಗಲಿ ಭಾರತ

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ವಿಶ್ವಮಾನ್ಯ ಮಹೋದಯನ ಕೈ
-ಗಳಲಿ ಮೆರೆದಿದೆ ಭಾರತಾ /
ಸಾಧನೆಯ ಹಾದಿಯಲಿ ಸಾಗುತ,
ವಿಶ್ವ ಮಾನ್ಯತೆ ಪಡೆಯುತಾ /

ಬಡತನದಿ ಬೆಳೆದೆದ್ದು ಬಂದವ
ಕಷ್ಟ ಸುಖಗಳನರಿತವ /
ಸಂವಿಧಾನದ ನೆರಳಲೇ ಸರಿ
-ಯಾದ ದಾರಿಯ ಹುಡುಕಿದಾ /

ಶತ್ರು ಸೈನ್ಯವ ಹೊಡೆದು ಓಡಿಸಿ
ಸಿಂಧೂರ ತಿಲಕವನಿರಿಸಿದಾ /
ಆಂತರಿಕ ಶತ್ರುಗಳ ಜುಟ್ಟನು     
ಹಿಡಿದು ಮುಷ್ಠಿಯೊಳಿರಿಸಿದಾ /

ಶತ್ರು ಪಾಳಯದಲ್ಲಿ ಗಡ ಗಡ 
ಗಡನೆ ನಡುಕವ ಹುಟ್ಟಿಸೀ /
ಸಿಡಿಲ ಮರಿಯಂತೆದ್ದು ಬಂದವ,
ಮಾತಿನಲೆ ಬಿಸಿ ಮುಟ್ಟಿಸೀ /

ಯೋಗ್ಯ ವ್ಯಕ್ತಿಯ ಕರಗಳಲ್ಲಿ
ಮೆರೆಯಲೀ ಈ ಭಾರತಾ/
ವಿಶ್ವ ಮಾನ್ಯತೆ ಪದೆದು ದೇಶವು
ಮೆರೆದು ಏಳ್ಗೆಯ ಕಾಣುತಾ /

☘️☘️☘️


Creative Writings
ಏಳ್ಗೆಯಾಗಲಿ ಭಾರತ