Karada Vishwa

Article · July 12, 2026

ಮುಕ್ತಕಗಳು

-- ವೀಣಾ ಎಂ ಭಟ್

ಸೂರಿನಡಿಯಲಿ ಸಿಗುವ ಸುಖ ಶಾಂತಿ ನೆಮ್ಮದಿಗೆ

ನಾರಿಯಲಿ ಇರಬೇಕು ಪ್ರೇಮ ಸಿಂಚನವು

ಸಿರಿಯು ಸಂಪದವಿದ್ದು ಸತಿಯು ಸಹಕರಿಸದಿರೆ

ಭೂರಿ ಭೋಜನಕೇನು ಫಲ ವೀಣಗಾನ


ಪಾಲಿನ ಪೈಪೋಟಿಯಲಿ ಸಹೋದರರ ಹೋರಾಟ

ಶೂಲದಂತೆ ಇರಿವ ಮಾತಲ್ಲಿ ಹೊಡೆತ

ಗೆಲುವಿಗಾಗಿ ಸತತ ಕೋರ್ಟು ಕಟಕಟೆಯನು ಏರಿ

ಪೋಲಾಗುತಿದೆ ಸ್ವತ್ತು ವೀಣಗಾನ

Creative Writings