
Article · June 1, 2026
ಅಪ್ಪ ನೀಡಿದ ಬಂಗಾರದ ಸಲಹೆ
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಮಗನೆ ಕೇಳು, ಕಷ್ಟಪಟ್ಟು
ದುಡಿಯಬೇಕು ನೀನು /
ಯಾರ ಮುಂದು ಕೈಯ ಚಾಚ
-ಬಾರದಲ್ಲವೇನು?/
ದುಡಿದು ಉಂಡರಾಗ ನಿನಗೆ
ಯಾರ ಹಂಗೂ ಇಲ್ಲ /
ದುಡಿದ ಹಣಕೆ ನೀನೇ ಒಡೆಯ,
ಬೇರೆ ಯಾರೂ ಅಲ್ಲ /
ಆಳಿನಂತೆ ದುಡಿದು ದುಡಿದು
ರಾಜನಂತೆ ಬಾಳೂ /
ಕಷ್ಟ ಸುಖವು ಸಹಜತಾನೇ?
ಎಲ್ಲಸಹಿಸಿ ತಾಳೂ /
ಬದುಕೆಂದರೆ ಹೀಗೇ ತಾನೇ?
ಇಹುದು ಏಳು ಬೀಳೂ /
ಬುದ್ಧಿಮಾತು ಹೇಳುತಿರುವೆ,
ಮಗನೆ, ಬಿಡದೆ ಕೇಳೂ /
ಅರಸನಂತೆ ಬಾಳದಿದ್ದ-
-ರೇನು ಚಿಂತೆ ಬೇಡಾ /
ಭಿಕ್ಷುಕನಂತಾಗಿ ಬೇಡಿ
ಬಾಳೊ ಬದುಕು ಬೇಡ /
ನಿನ್ನ ಕಾಲ ಮೇಲೆ ಸ್ವತಃ
ನೀನು ನಿಲ್ಲಬೇಕು /
ಓದಿ,ಜ್ಞಾನ ಪಡೆದು
ಬುದ್ಧಿವಂತನಾಗಬೇಕು /
ನಿನ್ನ ನಡೆಗೆ ಜನರು ಕೈಯ-
-ನೆತ್ತಿ ಮುಗಿಯಬೇಕು /
ಹೆಮ್ಮೆ ಪಡುವ ಹಾಗೆ ನಡತೆ
ನಿನ್ನದಾಗಬೇಕು!
☘️☘️☘️☘️
Creative Writings
