
Article · July 13, 2026
ಭಕ್ತಿ ಗೀತೆ
_ವೀಣಾ ಎಂ ಭಟ್
ಕೃಷ್ಣ ಕೃಷ್ಣ ನಿನ್ನ ನಂಬಿದೆನು ಹೇ ದೇವಾ
ದೇವಾಧಿದೇವನೆ ಪುರುಷೋತ್ತಮ ದೇವಾ
ಬಯಸಿ ಬಂದಿಹ ಭಾಗ್ಯ ಕಸಿದು ಹೋಯಿತಲ್ಲ
ಬೆಸೆದು ಹೋಗಿದೆ ಜೀವ ದುಃಖದಲಿ ಬೆಂದೂ
ಬಸವಳಿದು ಹೋದೆನು ಜೀವ ಹೃದಯ ನೊಂದು
ಒಸಿಯಾದರೂ ಕೃಪೆಯು ಇರಲಿ ಶ್ರೀಹರಿಯೆ
ಕಷ್ಟ ಸುಖಗಳು ಎರಡು ಬೆಂಬಿಡದ ಭೂತದಂತೆ
ಮುತ್ತಿ ಬರುವುದು ಸಹಜ ಬಾಳಿನಲಿ ದೇವಾ
ಇಷ್ಟ ದೈವವು ನೀನೆ ಬೇಡುವೆನು ಅನವರತ
ಕೊಟ್ಟು ಬಿಡು ನಿನ್ನಿಷ್ಟ ವೈಕುಂಠ ಪತಿಯೇ
ಮಂದಗತಿಯಲಿ ಜೀವ ಸಾಗುತಿದೆ ಮುಂದಕೆ
ಇಂದಿರೇಶನೆ ನಿನ್ನ ನಂಬಿದೆನು ದೇವಾ
ಮಂದರೋದ್ಧರ ಶ್ರೀ ನಂದ ಮುಕುಂದ ಹರಿ
ಬಂದು ದಯದೋರಿ ನೀ ಹರಸೆನ್ನ ದೇವಾ
Creative Writings
