Karada Vishwa

Article · July 18, 2026

ಮೊದಲೊಂದಿಪೆನಿನಗೆ

---ರಾಧಾಕೃಷ್ಣ ಭಟ್ ಕುರುಮುಜ್ಜಿ

(ಧಾಟಿ - ನಂಬಿದೆ ನಿನ್ನಾ ನಾಗಾಭರಣ)

ಮೊದಲೊಂದಿಪೆನಿನಗೆ ಪಾರ್ವತಿತನಯಾ

ಭಕ್ತರಿಗೀಯೋ ಅಭಯಾ

ನಿನ್ನೀ ನಾಮವ ಜಪಿಸಿ

ಶ್ರೀಗಣನಾಥನ ಸ್ಮರಿಸಿ

ನಮಿಸಲು ಕಾರ್ಯಕೆ ಶುಭವನ್ನೀಯುವೆ

ಗಂಗಣಪತಯೇ ನಮೋ ನಮೋ

||ಮೊದಲೊಂದಿಪೆ||

ಮೋದಕಪ್ರಿಯ ಗಣನಾಥ ನಿನ್ನೀ ನಾಮವೆ ಅಮೃತ

ತೋರೊ ದಯಾಕಾರ್ಯ ಜಯ

ಆಗಲು ಪೂಜೆಯ ಮಾಡುವೆವಯ್ಯಾ

ವಂದನೆ ನಿನಗೆ ಗಣಪಯ್ಯ

||ಮೊದಲೊಂದಿಪೆ||

ಭಕ್ತರ ಪೂಜೆಗೆ ಒಲಿದೂ ಹರಸುವೆ

ಭಕ್ತರಿಗೊಲಿದು

ಗಜವದನಾ ಕೊಡು ಗಮನ

ನಿನ್ನೀ ನಾಮವು ಪಾವನವಯ್ಯಾ

ಪಾಲಿಸು ಶಂಕರಕುವರ

||ಮೊದಲೊಂದಿಪೆ||

Creative Writings