Karada Vishwa

Article · June 19, 2026

ಭತ್ತದೊಳಕ್ಕಿ.......

✍🏻ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ


ಭತ್ತದೊಳಕ್ಕಿಯ ಇರಿಸಿದ ದೇವರು, 
ಬಿತ್ತಿದರೇ ಬೆಳೆ ಬರಲೆಂದೂ.../
ಬಂದಿಹ ಬೆಳೆಯಾ ಬೇಯಿಸಿ ತಿಂದರೆ
ಅನ್ನವು ಸಕಲರಿಗಿರಲೆಂದೂ..../

ಬಿತ್ತಿದ ಕಾಳೂ ಚಿಗುರಿತು, ಬೆಳೆಯಿತು, 
ಸೊಕ್ಕಿತು ಹಸಿರೂ ಚೆಲುವುಕ್ಕೀ....../
ಬೆಳೆದಿಹ ಚಿಗುರೂ, ತೆನೆಗಳ ತಿನ್ನಲು,       
ನುಗ್ಗಿತು ಇಲಿ, ಹೆಗ್ಗಣ, ಹಕ್ಕೀ...../

ರೈತನು ಜಾಣ, ಬಂದ ನಿಧಾನ 
ಬಲೆಯನು -ಹರಡಿದ ಕಾಳಿಕ್ಕೀ..../
ಸಂಚನು ಅರಿಯದೆ ಬಂದಿತು ಹಕ್ಕೀ..
ನರಳಿತು ಬಲೆಯೊಳು ತಾ  ಸಿಕ್ಕೀ.../

ಇಲಿಯನು ಕರೆದೂ ಹಕ್ಕಿಯು ಹೇಳಿತು, 
ಬಿಡಿಸೆನ್ನನು ನೀ ದಯೆಯುಕ್ಕೀ.../
ಕರುಣೆಯ ತೋರೀ ಬಿಡಿಸಿತು ಇಲಿ,ಬಲೆ... 
ಇಬ್ಬರಲೂ ಗೆಳೆತನವುಕ್ಕೀ..../.

ಒಂದೆಡೆ ಸೇರಿ ಇಲಿ, ಹೆಗ್ಗಣ, ಕೈ 
ಜೋಡಿಸಿತೂ ತಾನೂ ಹಕ್ಕೀ...../
ಬೆಳೆದಿಹ ಬೆಳೆ, ತೆನೆ, ಕಾಳೊಂದುಳಿಸದೆ, 
ತಿಂದ್ಹಾಕಿತು ಎಲ್ಲವ ಮುಕ್ಕೀ..../

ಅಳುತಿದ್ದನು ರೈತನು ಬಿಕ್ಕೀ
ಕಣ್ಣೀರಿಳಿಯಿತು ಕೆನ್ನೆಯ ಮುತ್ತಿಕ್ಕೀ..../

☘️☘️☘️☘️
Creative Writings