
News · July 12, 2025
ಅಭಿನಂದನೆಗಳು - ಅಭಿಷೇಕ್ ಆರ್. ಪಂಡಿತ್ ಅವರಿಗೆ
ರಸಾಯನಶಾಸ್ತ್ರದಲ್ಲಿ ಬಿ.ಎಸ್.ಸಿ (ಆನರ್ಸ್) ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಸುವರ್ಣ ಪದಕ (ಗೋಲ್ಡ್ ಮೆಡಲ್)ಕ್ಕೆ ಭಾಜನರಾಗಿದ್ದಾರೆ.
ಕರಾಡ ಬ್ರಾಹ್ಮಣ ಸಮುದಾಯದ ಯುವ ಪ್ರತಿಭೆ ಅಭಿಷೇಕ್ ಆರ್. ಪಂಡಿತ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಇದರ 25ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ರಸಾಯನಶಾಸ್ತ್ರದಲ್ಲಿ ಬಿ.ಎಸ್.ಸಿ (ಆನರ್ಸ್) ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಸುವರ್ಣ ಪದಕ (ಗೋಲ್ಡ್ ಮೆಡಲ್)ಕ್ಕೆ ಭಾಜನರಾಗಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಹೆಮ್ಮೆ ಹಾಗೂ ಸಂತೋಷದ ಕ್ಷಣ.
ಅಭಿಷೇಕ್ ಅವರ ಈ ಶ್ರೇಷ್ಠ ಸಾಧನೆಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
Education
