Karada Vishwa

Article · April 19, 2026

ಕ್ರೀಡೆಗೊಂದು ಹಾಡು

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ.

ಮಂಗಳೂರಲ್ಲಿಂದು ಕ್ರೀಡಾಕೂಟ 
ಮಹಿಳೆಯರೂ ಭಾಗವಹಿಸುವ ಚಂದದಾಟ

ಸಿದ್ದವಾಗಿಹುದಂತೆ ತಂಡಗಳು ಎಂಟು
ಹೊತ್ತು ತರುವವರಾರು ಬಹುಮಾನ ಗಂಟು ?

ವೇದಿಕೆಯು ಸಿದ್ಧವಿದೆ ಹೆಸರು ಅವತರಣ 
ಉದ್ದೇಶ ಒಳಿತಿಹುದು ಸಬಲೀಕರಣ 

ಉತ್ಸಾಹ ಉಲ್ಲಾಸ ಮೈದುಂಬಿ ಬಂದು
ಹರಡಿ ದೇಶದ ತುಂಬ ಕೀರ್ತಿಯಾಸಿಂಧು

ನಡುವೆ ಬಾರದೆ ಇರಲಿ ಯಾವುದೇ ಕುಂದು
ಎಲ್ಲರನು ರಕ್ಷಿಸಲಿ ಆ ದೀನಬಂಧು
Creative Writings
ಕ್ರೀಡೆಗೊಂದು ಹಾಡು