Karada Vishwa

News · August 26, 2026

ಮಂಗಳೂರು ಕರಾಡ ಸಮಾಜ ಭವನದಲ್ಲಿ ಋಗ್ವೇದ ಉಪಾಕರ್ಮ ಸಂಪನ್ನ

ವರದಿ ಕೃಪೆ : ಜಯರಾಮ ಭಟ್ ಮಂಗಳೂರು

ಮಂಗಳೂರಿನ ಕರಾಡ ಸಮಾಜ ಭವನದಲ್ಲಿ ಋಗ್ವೇದ ಉಪಾಕರ್ಮವು ಭಕ್ತಿಭಾವದಿಂದ ಹಾಗೂ ಅಚ್ಚುಕಟ್ಟಾಗಿ ನೆರವೇರಿತು. ವೈದಿಕರಾದ ಶ್ರೀಕೃಷ್ಣ ಭಟ್ ಆವಳ ಮಠ ಅವರ ವೈದಿಕತ್ವದಲ್ಲಿ ಬೆಳಿಗ್ಗೆ 6:30ರಿಂದ 8:30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಒಟ್ಟು 32 ಮಂದಿ ಭಾಗವಹಿಸಿದ್ದರು.

ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನೆರವೇರಿದ ಬಳಿಕ, ಉಪಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಸಮಾಜ ಬಾಂಧವರ ಸಕ್ರಿಯ ಭಾಗವಹಿಸುವಿಕೆಯಿಂದ ಸಮಾರಂಭವು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬಂತು.

CommunityHeritage
ಮಂಗಳೂರು ಕರಾಡ ಸಮಾಜ ಭವನದಲ್ಲಿ ಋಗ್ವೇದ ಉಪಾಕರ್ಮ ಸಂಪನ್ನ