Karada Vishwa

Article · March 21, 2026

ಏಕೀ ಯುದ್ಧೋನ್ಮಾದ ?

- ಸಾಗರಿ

ಹಾಲುಗಲ್ಲದ ತನ್ನ ಪುಟ್ಟ ಕಂದಮ್ಮಗಳನು
     ಮುತ್ತಿಟ್ಟು ಕಳುಹಿಸಿದರು  ಶಾಲೆಗೆಂದು
ಅಕ್ಕರೆಯ ಅಕ್ಷರಗಳು ಆಟವಾಡುತಲಿತ್ತು
   ಹಲವು ಬಣ್ಣಗಳು ಬರೆದ ಚಿತ್ರವಂದು

ಅರಳುವ ಸುಮಗಳಂತೆ ಆ ಬಾಲೆಯರು 
   ಕಂಪ ಬೀರುತ ತಮ್ಮ ಲೋಕದಲ್ಲಿ 
ಎಲ್ಲಿತ್ತೋ ಆ ವಕ್ರದೃಷ್ಟಿಯದು ಬೀರಿತ್ತು 
   ಪುಟ್ಟ ಕನಸುಗಳನ್ನು ಹೊಸಕಿ ಹಾಕಿ 

ಹಾರಿ ಬಂತಾ ಕ್ಷಿಪಣಿ ನುಂಗಿತ್ತು ಜೀವವನು
  ಜವರಾಯನೇಕಿಷ್ಟು ಕ್ರೂರಿಯಾಗಿಹನು 
ಒಡೆದ ಒಡಲಿನ ಹಡೆದ ಮಾತೆಯ ಕಣ್ಣೀರು 
     ನಿಲಿಸಲಾರದೇ ಯುದ್ಧೋನ್ಮಾದವನ್ನು?!

ಯುದ್ಧ ದಾಹವದು ಅಬ್ಬರಿಸಿ ಕೊಬ್ಬುತಿದೆ
   ರೋಗಿಗಳ ಮೇಲೂ ದಯೆಯು ಇರದೆ 
ಈ ಕ್ರೂರ ನರಬಲಿಯು ಕೊನೆಗೊಳ್ಳಲೆಂದು
    ವಿಶ್ವ ಶಾಂತಿಗಾಗಿ ನಮ್ಮ ಪ್ರಾರ್ಥನೆ ಇದೆ..



Creative Writings
ಏಕೀ ಯುದ್ಧೋನ್ಮಾದ ?