Karada Vishwa

Article · July 13, 2026

ಗಾನಕೋಗಿಲೆ ಜಾನಕಿಯಮ್ಮನಿಗೆ ನುಡಿನಮನ

✍️ಮೀರಾ ಭಟ್ ಮಂಗಳೂರು

ಸಪ್ತಸ್ವರಗಳ ಗಂಟಲಲ್ಲಿರಿಸಿದ ಗಂಧರ್ವ ಗಾಯಕಿ

ಸರಸ್ವತಿ ದೇವಿಯನ್ನು ಮನವೊಲಿಸಿದ ನಾಯಕಿ

ನಡೆದಳು ಬಹುದೂರ ಆದರ್ಶದಲ್ಲೇ ಬದುಕಿ

ನಮ್ಮೆಲ್ಲರ ಪ್ರೀತಿಯ ಗಾನಕೋಗಿಲೆ ಎಸ್ ಜಾನಕಿ .....||

ಕನ್ನಡ ನಾಡಿನ ಬಗ್ಗೆ ಎಷ್ಟು ಪ್ರೇಮ ನಿನಗೆ ನೋಡು

ಕನ್ನಡ ಭಾಷೆಯಲ್ಲೇ ನಿನ್ನ ಅಂತಿಮ ಹಾಡು

ಈ ನೆಲದಲ್ಲೇ ನೀನು ಮರು ಜನುಮ ಪಡೆದು ಬಿಡೂ

ಕಾಯುತ್ತಿದೆ ನಿನಗಾಗಿ ಇಡೀ ಕನ್ನಡ ನಾಡು ||

ಸರಳ ಸಜ್ಜನಿಕೆಯ ಗಾನಕೋಗಿಲೆ

ಬದುಕಿನುದ್ದಕ್ಕೂ ಕಳೆದೆ ನೀನು ಬಿಳಿ ಸೀರೆಯಲ್ಲೇ

ನಿನ್ನನ್ನು ಬೀಳ್ಕೊಡುವುದು ಸಹಿಸದ ನೋವಲ್ಲೇ

ನಿನಗೆ ಚಿರಶಾಂತಿ ಕನ್ನಡ ಮಣ್ಣಲ್ಲೇ..❤️ ||

ಸಹಸ್ರ ಸಹಸ್ರ ಹಾಡುಗಳು ಇಹದಲ್ಲಿ ಜೀವಂತ

ಅರುವತ್ತು ದಶಕಗಳ ಸಾಧನೆ ಬಣ್ಣಿಸಲಿ ಏನೆಂತ

ಸಾಕಾಯ್ತೆ ನಿನಗೆ ಈ ಬದುಕಿನ ಧಾವಂತ

ಸದ್ಗತಿ ನೀಡಲಿ ನಿನ್ನ ಆತ್ಮಕ್ಕೆ ಆ ಭಗವಂತ ||

🙏🙏

Creative Writings