Karada Vishwa

Article · July 13, 2026

ಭಜನೆ

_ವೀಣಾ ಎಂ ಭಟ್

ಬಾಲಗೋಪಾಲ ಓಡುತ ಬಾ

ಗೋಪಾಲ ಕೃಷ್ಣ ಲೀಲೆಯ ತೋರಲು ಬೇಗನೆ ಬಾ

ಕದ್ದು ನೋಡಿ ಮೆಲ್ಲ ಮುಂದಡಿ ಇರಿಸಿ

ಮುದ್ದು ಕರದೊಳು ಬೆಣ್ಣೆಯ ಹಿಡಿದು

ಸದ್ದು ಮಾಡದೆ ಚಿಣ್ಣರ ಜತೆಯಲಿ

ಮೆದ್ದು ಬಿದ್ದು ನೀ ಓಡಿದೆಯಲ್ಲೊ

ಕಾಳಿಯ ಮರ್ದನ ಮಾಡಿ ತೋರಿದೆ

ಕಾಳಸರ್ಪವನು ಹೆಡೆಮುರಿ ಕಟ್ಟಿದೆ

ಕಾಳಿಂದಿ ನದಿಯ ವಿಷವನು ನೀಗಿದೆ

ಕಾಳರಕ್ಕಸರಿಗೆ ಯಮನು ನೀನಾದೆ

ಕಾಲನ ಪಾಶಕೆ ಮಾವನ ದೂಡಿದೆ

ಕಾಡುವ ಕಾಟವ ಭವದಿಂದ ನಶಿಸಿದೆ

ಕಾಲಗರ್ಭದಿ ಖಳರ ಲೀನಗೊಳಿಸುವ

ಕಾರಣವಾಗಿ ಭುವಿಗೆ ಬಂದೆ ನೀ

ಪರಿ ಪರಿ ವಿಧದಲಿ ಪೂಜೆಯ ಗೈಯುವೆ

ಫಲದ ಬಯಕೆಯ ವ್ಯಾಮೋಹವು ಇಲ್ಲದೆ

ಪರಮ ಪಾವನ ಪುರುಷೋತ್ತಮನ

ಪಾದಕೆರಗಿ ಶರಣು ಶರಣು ದೇವನೆ

ಭಾಗ್ಯದ ಲಕ್ಷ್ಮಿ ಬಾರಮ್ಮಾ..ರಾಗ

Creative Writings