
Article · October 29, 2025
ಜನನಾಯಕ
ಕವಯಿತ್ರಿ : ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .
[ಆಧುನಿಕ ಪುಣ್ಯಕೋಟಿ ]
ಧರಣಿ ಮಂಡಲ ಮಧ್ಯದೊಳಗೆ,
ಭರತ ಖಂಡದ ದೆಹಲಿಯೊಳಗೆ,
'ಮೋದಿ ' ಎನ್ನುವ ಧೀರ ನಾಯಕ-
-ನವನ ಕಥೆಯನು ಹೇಳುವೇ ' ||
ದೇಶ ಸೇವೆಯೆ ಉಸಿರು ಎಂದಾ
ಮೋದಿಗೆ ಜಯವಾಗಲೀ |
ಸಂಘಕೂ ಜಯವಾಗಲೀ |
ಗುಜರಾತ್ ಎನ್ನುವ ರಾಜ್ಯದಲ್ಲಿ,
ಬಡ ಕುಟುಂಬದಿ ಜನಿಸಿದವನೂ,
ಚಹಾ ಮಾರುತ ಬೆಳೆದು ಬಂದೂ,
ದೇಶ ನಾಯಕನಾದನೂ ||
ಸಂಘ ಪರಿವಾರ ದಲಿ ಗುರುತಿಸಿ
ಸಂಘ ಶಕ್ತಿಯ ಬೆಳೆಸಿಕೊಂಡೂ
ಸತ್ಯ ಮಾಗ೯ದಿ ನಡೆದು ಬಂದವ,
ನ್ಯಾಯನಿಷ್ಟುರವಾದಿಯೂ II
ಸಂಘಕೇ ಜಯವಾಗಲೀ....
ದೇಶಭಕ್ತಿಯ ಬೆಳೆಸಿಕೊಂಡೂ
ಜನರಿಗೊಳಿತನು ಮಾಡಿಕೊಂಡೂ,
ಹಲವು ಹೋರಾಟದಲಿ ಭಾಗಿಯು
ಆಗಿ ಜನಮನ ಗೆದ್ದನೂ||
ಮೋದಿಗೇ ಜಯವಾಗಲೀ...
ಗೆದ್ದು ಬಂದು ಚುನಾವಣೆಯಲೀ
ಪಟ್ಟವೇರುತ ದೆಹಲಿಯಲ್ಲೀ,
ಪ್ರಧಾನಿಯಾದನು "ಭರತಖಂಡಕೆ,"
ಪಡೆದು 'ಭಲೇ ' ಜನ ಮೆಚ್ಚುಗೇ||
ಶಕ್ತಿ ತುಂಬಿದ ಸೈನ್ಯದೊಳಗೇ
'ದೇಶರಕ್ಷಣೆ ಕಾರ್ಯದೊಳಗೇ
ಸುತ್ತ ದೇಶದ ಗಡಿಗಳಲ್ಲೇ
ದಿಟ್ಟ ಸೈನ್ಯವ ಬೆಳೆಸಿದಾ||
ಸೈನ್ಯಕೂ ಜಯವಾಗಲೀ....
ರಾಮ ರಾಜ್ಯವ ಧರೆಗೆ ತಂದಾ
ಕಪ್ಪು ಹಣವನು ಬಯಲಿಗೆಳೆದಾ,
ದಿಟ್ಟ ಧೀರೋದಾತ್ತ ನಡೆಯದು,
ರಾಮಮಂದಿರ ನಿರ್ಮಿಸೇ ||
ದೈವಭಕ್ತನು ನಮ್ಮ ಮೋದಿ,
ದೇಶಭಕ್ತನು ನಮ್ಮ ಮೋದಿ,
ಸತ್ಯ ನಿಷ್ಟನು ನಮ್ಮ ಮೋದೀ,
ಮಾತೃ ಭಕ್ತನು ಮೋದಿಯೂ ||
"ಅಮಿತ ' 'ಭುಜಬಲ ಇವನಿಗಿಹುದೂ,
" ನಿರ್ಮಲದ 'ಆ ಮನಸು ಇಹುದೂ
ಜ್ಞಾನದಲು ಮುಂಚೂಣಿಯಲ್ಲಿಹ
ಸತತವೂ ಶ್ರಮ ವಹಿಸುವಾ ||
ದೇಶಕಾಗಿ ಸಂಸಾರ ತೊರೆದಾ,
ದೇಶಕಾಗಿ ಗೆದ್ದುಬಂದಾ,
ದೇಶ ಸೇವೆಯ ಮಾಡಿಕೊಂಡೂ
ಜನರ ಮನದಲಿ ನೆಲೆಸಿದಾ!
ದೇಶ ಸೇವೆಯೆ ಉಸಿರು ಎಂದಾ,
ಮೋದಿಗೇ ಜಯವಾಗಲೀ
ಮೋದಿಯನು ಈ ತರದಿ ಬೆಳೆಸಿದ
ಸಂಘಕೂ ಜಯವಾಗಲೀ ||
🙏🙏🙏🙏
