
Article · September 14, 2026
ಮನೆಯಲ್ಲಿ ಗಣೇಶ ಪೂಜೆ
- ನಾವಥೆ ಕುಟುಂಬ, ಕೊಪ್ಪ
ಭಾರತದಲ್ಲಿ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯು ಅತ್ಯಂತ ಪ್ರಮುಖವಾದ ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಮನೆಯಲ್ಲಿಯೂ ಪ್ರತಿ ವರ್ಷ ಗೌರಿ ಗಣೇಶ ಹಬ್ಬವನ್ನು ಬಹಳ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ.
ಸಿದ್ಧತೆ:
ಹಬ್ಬಕ್ಕೆ ಎರಡು ದಿನ ಮುಂಚೆಯೇ ಮನೆಯನ್ನು ಸ್ವಚ್ಛಗೊಳಿಸುತ್ತೇವೆ. ಹಬ್ಬದ ದಿನದಂದು ಬೆಳಿಗ್ಗೆ ಮನೆಯ ಮುಂದೆ ಸುಂದರವಾದ ರಂಗೋಲಿ ಬಿಡುತ್ತೇವೆ. ಮಾವಿನ ತೋರಣ, ಬಾಳೆ ಕಂಬಗಳಿಂದ ಪೂಜೆಯ ಜಾಗವನ್ನು ಅಲಂಕರಿಸುತ್ತೇವೆ. ಅಂಗಡಿಯಿಂದ ಮಣ್ಣಿನ ಗಣೇಶನ ಮೂರ್ತಿ, ಹೂವು, ಹಣ್ಣು, ಕಬ್ಬು, ಪತ್ರೆಗಳನ್ನು ತರುತ್ತೇವೆ.
ಪೂಜೆಯ ವಿಧಾನ:
ಗಣೇಶನ ಮೂರ್ತಿಗೆ ಕೆಂಪು, ಹಳದಿ ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವಿನ ಹಾರಗಳನ್ನು ಹಾಕುತ್ತೇವೆ.
ನಂತರ ಸಂಕಲ್ಪ ಮಾಡಿ ಪೂಜೆಯನ್ನು ಆರಂಭಿಸುತ್ತೇವೆ. ಮೊದಲು ಗಣೇಶನಿಗೆ ಗರಿಕೆಯನ್ನು ಸಮರ್ಪಿಸಿ, 21 ಪತ್ರೆಗಳಿಂದ ಪೂಜೆ ಮಾಡುತ್ತೇವೆ. ಅಥರ್ವಶೀರ್ಷ, ಗಣೇಶಾಷ್ಟಕವನ್ನು ಹೇಳುತ್ತೇವೆ. ನೈವೇದ್ಯಕ್ಕೆ ಮೋದಕ, ಕಡುಬು, ಪಾಯಸ, ವಡೆ, ಚಕ್ಕುಲಿ ಮಾಡಿರುತ್ತೇವೆ. ಗಣೇಶನಿಗೆ ಮೋದಕವೆಂದರೆ ಬಹಳ ಇಷ್ಟ. ಕೊನೆಗೆ ದೀಪದ ಆರತಿ ಮಾಡಿ, ಎಲ್ಲರಿಗೂ ಪ್ರಸಾದ ಹಂಚುತ್ತೇವೆ.
ಹಬ್ಬದ ಮಹತ್ವ ಮತ್ತು ಸಂಭ್ರಮ:
ಗಣೇಶನು ವಿಘ್ನ ನಿವಾರಕ. ಅವನನ್ನು ಪೂಜಿಸುವುದರಿಂದ ಮನೆಯಲ್ಲಿ ಇರುವ ಎಲ್ಲ ಕಷ್ಟಗಳು ದೂರವಾಗಿ, ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಹಬ್ಬದಂದು ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು ಎಲ್ಲರೂ ನಮ್ಮ ಮನೆಗೆ ಬಂದು ಗಣೇಶನ ದರ್ಶನ ಪಡೆಯುತ್ತಾರೆ. ಎಲ್ಲರೂ ಸೇರಿ ಮಾತನಾಡಿ, ಊಟ ಮಾಡುವಾಗ ಹಬ್ಬದ ಸಂತೋಷ ಇಮ್ಮಡಿಯಾಗುತ್ತದೆ.
ಒಂದು ದಿನದ ಕಾಲ ಗಣೇಶನು ನಮ್ಮ ಮನೆಯಲ್ಲಿಯೇ ಇರುತ್ತಾನೆ. ಸಂಜೆ ಪೂಜೆ ಮಾಡುತ್ತೇವೆ ಮತ್ತು ಸಂಜೆ ಗಣೇಶನಿಗೆ ಮತ್ತೊಮ್ಮೆ ಪೂಜೆ ಮಾಡಿ "ಗಣಪತಿ ಬಪ್ಪಾ ಮೋರಯಾ, ಮುಂದಿನ ವರ್ಷ ಬೇಗ ಬಾ" ಎಂದು ಹೇಳುತ್ತಾ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತೇವೆ.
ಮನೆಯಲ್ಲಿ ಮಾಡುವ ಗಣೇಶ ಪೂಜೆಯು ನಮ್ಮ ಕುಟುಂಬದವರನ್ನೆಲ್ಲ ಒಂದುಗೂಡಿಸುತ್ತದೆ. ಇದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಹೆಮ್ಮೆ ಅನಿಸುತ್ತದೆ.


