Karada Vishwa

News · April 19, 2026

ವೇದಮಾತಾ ಟ್ರಸ್ಟ್ ಪ್ರಕಟಣೆ

(ಕೊಠಡಿಗಳನ್ನು ನವೀಕರಿಸುವ ಬಗ್ಗೆ)

ಆತ್ಮೀಯ ಸಮಾಜ ಬಾಂಧವರೇ,

 ಶ್ರೀ ಕ್ಷೇತ್ರದಲ್ಲಿ ವರ್ಷಂಪ್ರತಿಯಂತೆ ಈ ವರ್ಷ ಕೂಡ ವಸಂತ ವೇದ ಶಿಬಿರ ನಡೆಯುತ್ತಿದ್ದು 44 ವಿದ್ಯಾರ್ಥಿಗಳು ಶಿಬಿರದಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಒಂದು ತಿಂಗಳ ಪರ್ಯಂತ ನಡೆಯುವ ಈ  ಶಿಬಿರವು ತಾರೀಕು 16.04.2026 ರಿಂದ ಪ್ರಾರಂಭಗೊಂಡಿದ್ದು 15.5.2026 ರಂದು ಸಂಪನ್ನಗೊಳ್ಳಲಿರುವುದು.  ಶ್ರೀ ಕ್ಷೇತ್ರದಲ್ಲಿ  ಸಮಾರಂಭಗಳು ಏರ್ಪಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನನುಕೂಲವಾಗುವುದನ್ನು ಮನಗಂಡು  ಎರಡು ವಿಶಾಲ ಕೊಠಡಿಗಳನ್ನು ನವೀಕರಿಸಲಾಗುತ್ತಿದೆ. ಇದಕ್ಕಾಗಿ ತಗಲುವ ಅಂದಾಜು ವೆಚ್ಚ ರೂಪಾಯಿ 5 ಲಕ್ಷಗಳು. ಸಹೃದಯಿ ಸಮಾಜ ಬಾಂಧವರು ಈ ಮಹತ್ಕಾರ್ಯಕ್ಕೆ ಕೈಜೋಡಿಸ ಬೇಕಾಗಿ ವಿನಮ್ರ ವಿನಂತಿ.

ಇತೀ 
 ಅಧ್ಯಕ್ಷರು.


ಬ್ಯಾಂಕ್ ವಿವರಗಳು :
ವೇದಮಾತಾ ಟ್ರಸ್ಟ್ ಪ್ರಕಟಣೆ