Karada Vishwa

Article · March 19, 2026

ಹೊಸ ವರುಷ ಸಂತಸವ ಹೊತ್ತು ತರಲಿ 💐

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

☘️☘️☘️
ಬಂತು ಬಂತು ಯುಗಾದಿ, ಉರುಳಿ ಕಾಲದ ಗಾದಿ
ಮುಂದಕಡಿ ಇಡಬೇಕು ಬಾಳ ಹಾದಿ 
ಪ್ರಕೃತಿಯಲಿ ಹೊಸ ಚಿಗುರು, ಹೊಸತು ಭರವಸೆ ಮೂಡಿ,
ಹೊಸತೊಂದು ಯುಗದೆಡೆಗೆ ಮುಖವ ಮಾಡಿ /

ರಸ್ತೆಯುದ್ದಕು ಹಸಿರ  ಸಿರಿಯಿಂದ ಚೆಲ್ಲಿರುವ 
ಸುಂದರದ ಸುಮರಾಶಿ ಹಾಸು ಮೆತ್ತೆ 
ಕಣ್ಗಳಿಗೆ ಹಬ್ಬವೂ ಮನಕೆ ಚೇತೋಹಾರಿ
ಋತು ವಸಂತನು ಬಂದ ನಗುತ ಮತ್ತೆ /

ಹಕ್ಕಿಗಳ ಇಂಚರಾ ದುಂಬಿಗಳ ಝೇಂಕಾರ
ಸುಂದರವು ಈ ಪ್ರಕೃತಿ ಸುಮನೋಹರಾ 
ಹಳೆಬೇರು ಹೊಸಚಿಗುರು ಮತ್ತೆ ಲವಲವಿಕೆಯೂ 
ಪರಿಸರದಿ ಮೈದಳೆದು ಚಿತ್ತಹಾರ / 

ಬೇವು ಬೆಲ್ಲವ ಹಂಚಿ, ಎಲ್ಲರಿಗೂ ಹಾರೈಕೆ
ಕಷ್ಟ ಸುಖಗಳು ಸಮವೆ ಇರಲಿ ಎಂದೂ 
ಸುಖದುಃಖ ಹಂಚುತಲಿ ಸಂತಸದಿ ಬಾಳುವುದು 
ಚೆಲುವ ಜೀವನ ಯಾನ ಸಾಗಿಮುಂದೂ /

ಮತ್ತೆ ಬಂದ ವಸಂತ, ಹೊತ್ತು ತಂದ ಸುಗಂಧ     
ಫಲಪುಷ್ಪ ಕಾಣಿಕೆಯ ರೂಪದಲ್ಲಿ 
ವರ್ಣಮಯ ಪ್ರಕೃತಿಯಲ್ಲಿ ವರ್ಣಮಯ ಫಲಪುಷ್ಪ
ಜೀವರಾಶಿಗೆ ಸ್ವಣ೯ಯುಗವು  ಇಲ್ಲಿ /

ಚೈತ್ರ ಶುದ್ಧದ ಪಾಡ್ಯಮಿಯ ದಿನದೆ  ಹೊಸ ವರುಷ 
ಪ್ರತಿ ವರುಷ ಹೀಗೆಯೇ ಮುಂದುವರೆದು
ಸಂತೋಷ ಸೌಭಾಗ್ಯ ಆರೋಗ್ಯ ಭಾಗ್ಯವನು     
ನೀಡಿ ಹರಸಲಿ ದೇವ ದೀನಬಂಧು /

☘️☘️☘️

Creative Writings
ಹೊಸ ವರುಷ ಸಂತಸವ ಹೊತ್ತು ತರಲಿ 💐