
News · August 26, 2026
ಋಗುಪಾಕರ್ಮ - ಕರಾಡ ಬ್ರಾಹ್ಮಣ ಸಭಾ, ಮೈಸೂರು
By Rajarama Chokemoole
ವರದಿ : ರಾಜಾರಾಮ ಚೋಕೆಮೂಲೆ
ಕರಾಡ ಬ್ರಾಹ್ಮಣ ಸಭಾ(ನೋ)ಮೈಸೂರು ಇದರ ನೇತೃತದಲ್ಲಿ ಋಗುಪಾಕರ್ಮವು ಇಂದು ಪ್ರಾತಃ ಕಾಲ 6.00 ಗಂಟೆಗೆ ಸಭಾದ ಕಾರ್ಯಾಲಯದಲ್ಲಿ ನಡೆಯಿತು. ಶ್ರೀಯುತ ವಿಘ್ನೇಶ ಭಟ್, ಸಜಂಕಿಲ ಅವರ ಪೌರೋಹಿತ್ಯದಲ್ಲಿ ನಡೆದ ಉಪಾಕರ್ಮ ವಿಧಿಗಳು ಶಾಸ್ತ್ರೋಕ್ತವಾಗಿ ನಡೆದು ಸಂಪನ್ನಗೊಂಡಿತು. 33 ಜನ ಕರಾಡ ಬಂಧುಗಳು ಭಾಗವಹಿಸಿದ್ದರು.
ಉಪಾಕರ್ಮದ ನಂತರ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

CommunityHeritage
