
Article · September 18, 2026
ಕತ್ತಲಿನಿಂದಾ ಬೆಳಕಿನ ಕಡೆಗೆ....
By ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ನಿಲ್ಲದ ಜೀವನ ಯಾತ್ರೆಯಲ್ಲಿ ಒಲವು ತೋರಿಸುವ ಜೀವಗಳು ಜೊತೆಗಿದ್ದರೆ ಜೀವನ ಪ್ರಯಾಣ ಸ್ವಲ್ಪ ಹಗುರವೆನಿಸುತ್ತದೆ. ಇಲ್ಲದಿದ್ದರೆ ಜೀವನ ಭಾರವೆನಿಸುತ್ತದೆ......... ನಂಬಿಕೆ ವಿಶ್ವಾಸಗಳು ಇದ್ದರೆ ಮಾತ್ರ...
ಕತ್ತಲಿನಿಂದಾ ಬೆಳಕಿನ ಕಡೆಗೇ
ಮನುಜನೆ ನಿನ್ನಯ ಯಾನ/
ನಿತ್ಯ ನಿರಂತರ ಸಾಗುತಲಿಹುದೂ
ಜೀವನದುದ್ದ ಪ್ರಯಾಣ /
ಪ್ರೀತಿ,ಪ್ರೇಮ, ಸ್ನೇಹ ತುಂಬಿ
ಉರಿಸಿಡು ಒಲವಿನ ದೀಪ /
ಹಾದಿಯುದ್ದಕೂ ಬೆಳಕನ್ನೀಯಲಿ
ಸುಂದರ ಪ್ರಣತಿ ಪ್ರದೀಪ /
ಸಂಸಾರವೆನ್ನುವಾ ಬಂಧದ ನಡುವೇ
ಸಾಗಬೇಕಿದೆ ಹಾದಿ
ಪ್ರೀತಿ ಒಲವು ಇದ್ದರೆ ತಾನೇ
ದೀಪವು ಭದ್ರ ಬುನಾದಿ /
ಅರಿಷಡ್ವರ್ಗದ ತಿಮಿರವ ಕಳೆಯಲು
ಹಚ್ಚಿಡು ನಂಬಿಕೆ ದೀಪ /
ಹಚ್ಚಿದ ದೀಪ ಉರಿಯುತಲಿರಲೀ
ಅದುವೇ ದೈವ ಸ್ವರೂಪ /
ಸಾಲು ಸಾಲು ಆ ಹಣತೆಯನಿರಿಸೀ
ಉರಿಸಿಡು ಒಲವಿನ ದೀಪ /
ಒಳಿತನ್ನೀಯಲಿ ಒಳಿತನ್ನೀಯಲಿ
ಒಳಗಿಹ ಆತ್ಮ ಸ್ವರೂಪ /
Creative Writings
