Karada Vishwa

Article · September 14, 2026

ಅಭ್ಯುದಯ .

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಪ್ರಥಮ ಪೂಜಿತನಿಗಿದೊ ಪ್ರಥಮ ಪೂಜೆ. ಗುರು ಗಣಪತಿಯ ವಂದಿಸುತ, ಚೌತಿಯ ಶುಭ ಸಮಯದಲ್ಲಿ ಲೋಕಕ್ಕೆ ಮಂಗಳವಾಗಲಿ ಎಂದು ಹಾರೈಕೆಗಳು..

ಗಣಗಳಧಿಪತಿಯವನು
ಗಣಪತಿಯು ಬಂದ /
ಗಜದ ವದನವ ಹೊಂದಿದವನು
ಬಲು ಚಂದ /

ದೊಡ್ಡ ಉದರದ ಮೇಲೆ
ನಾಗನದು ಬಂಧ/
ಮೂಷಿಕನು ಜೊತೆಗಿರಲು
ಏನಿವನ ಚಂದ/

ವಿಘ್ನ ನಿವಾರಕನು
ಪಾರ್ವತಿಯ ಕಂದ/
ಚೌತಿಯಾ ದಿನದಂದು

ಧರೆಗಿಳಿದು ಬಂದ /

ಎಳ್ಳುಂಡಳಿಕ ಕಬ್ಬು
ಮೋದಕವ ತಿಂದ/
ಸರ್ವ ವಿಘ್ನವ ಕಳೆದು
ಅಭ್ಯುದಯ ತಂದ /

Creative Writings