
Article · August 28, 2026
ಇರಲಿ ಆಶೀರ್ವಾದ.
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಗುರು ಗಣಪತಿಯೆ ನಿನಗೆ
ಗೌರವದ ವಂದನೆಯು,
ಗರಿಕೆಯನು ಅರ್ಪಿಸುತಲಿರುವೇ../
ಗಣನಾಯಕಾ ನಿನಗೆ
ಎಳ್ಳುಂಡಳಿಕ ಕಬ್ಬು
ಭಕ್ತಿಯಲಿ ನಾ ನೀಡುತಿರುವೇ /
ದೇವ ಜಗದೀಶನೇ
ಮದವೂರ ವಿಘ್ನೇಶ
ಮೋದಕದ ಅರ್ಪಣೆಯು ನಿನಗೆ /
ಕಬ್ಬಿನಾ ಹೊರೆಯನ್ನೆ
ತಂದು ನಿನಗರ್ಪಿಸುವೆ,
ಬಾರಯ್ಯ ಗಣಪತಿಯೆ ಧರೆಗೇ /
ಭಾದ್ರಪದ ಶುಕ್ಲದಾ
ಚೌತಿಯಾ ದಿನದಂದು
ಶುಭ ಮುಹೂರ್ತದಲಿ ಬಾ ಮನೆಗೇ /
ಒಬ್ಬನೇ ಬರಬೇಡ
ಹೆತ್ತವರ ಕರೆದು ತಾ
ಸಿಗಲಿ ಆಶೀರ್ವಾದ ನಮಗೇ /
Creative Writings
