Karada Vishwa

Article · March 17, 2026

ಗ್ಯಾಸ್ ಪಂಚಕ (ಚುಟುಕುಗಳು)

- ರಾಧಾಕೃಷ್ಣ ಭಟ್ ಕುರುಮುಜ್ಜಿ

 

        ೧-ಪರಿಹಾರ

      
        ಸತಿ ಕೇಳಿದಳು ತನ್ನ ಪತಿಯಲ್ಲಿ
        ಮಾಡುವುದೇನ್ರೀ ಗ್ಯಾಸ್ ಸಿಗದಿದ್ರೆ?
        ಪತಿ ನಗುತ್ತಾ ನುಡಿದ ಶ್ರೀಮತಿಯಲ್ಲಿ
        ಹೋದರಾಯಿತು ಎಲ್ಲಾದ್ರೂ ಜಂಬರವಿದ್ರೆ
  

         ೨-ಕ್ಯೂ ಆರ್ ಯಸ್ ಟೀ

          
         ಗ್ಯಾಸ್ ಸಿಗಲು ಜನರ ಸಾಲು-ಕ್ಯೂ
         ಸಿಗದಿರಲುಮನೆಗೆ ರಿಟರ್ನ್- ಆರ್
         ಗ್ಯಾಸ್ ಸಮಸ್ಯೆಯ ವಾಸ್ತವ-ಯಸ್
         ಸಿಗದಿದ್ದರೆ ಚಿಂತೆ ಹೇಗೆ ಮಾಡಲಿ-ಟೀ?
       

         ೩-ಅಂದು---ಇಂದು

 
     ಕೆಲವು ವರ್ಷಗಳ ಹಿಂದಿನ ದುಸ್ಥಿತಿ
     ಹೆಚ್ಚಾಗಿ ಕೊರೋನಾ ವಿಶ್ವದೆಲ್ಲೆಡೆ
     ಅದೇ ರೀತಿ ಆಗಿದೆ ಇಂದಿನ ಪರಿಸ್ಥಿತಿ
     ಯುದ್ಧದಿಂದಾಗಿ ಸಿಗದೆ ಗ್ಯಾಸ್ ಅಂಡೆ 
    

      ೪-ಅನಿವಾರ್ಯ

                 
 ಕೆಲವೆಡೆ ಕಟ್ಟಿಗೆಯ ಒಲೆ
ಸೇರಿಹುದು ಎಲ್ಲೋ ಮೂಲೆ
ಈಗ ಹೆಚ್ಚಿದೆ ಪ್ರೀತಿ ಅದರ ಮೇಲೆ
ಸ್ವಾಗತಿಸುತ್ತಾರೆ ಹಾಕಿ ಮಾಲೆ

     ೫-ಗ್ಯಾಸ್ ಮುಗಿದಾಗ

                 
   ಮುಖತೊಳೆದು ದೇವರಿಗೆ ಕೈಮುಗಿಯಬೇಕು
   ಎಂದುಯೋಚಿಸುವಾಗ ಅವಳ ಉದಯರಾಗ
   ಮನದ ಅನಿಸಿಕೆ ಬಹುಷಃ ಗ್ಯಾಸ್ ಮುಗಿದಿರಬೇಕು?
   ವಾಸ್ತವವಿದು ಕೆಲವೊಮ್ಮೆ ಹೋಗಿ ನೋಡುವಾಗ

Creative Writings
ಗ್ಯಾಸ್ ಪಂಚಕ (ಚುಟುಕುಗಳು)