
News · October 9, 2025
ಕರಾಡ ಸಮ್ಮಿಲನ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು .
ಇಂದು(09-10-2025) ಕರಾಡ ಸಮ್ಮಿಲನ 2025ರ ಕಾರ್ಯಕ್ರಮಗಳ ಹಾಗೂ ಸ್ಪರ್ಧೆಗಳ ಆಮಂತ್ರಣ ಪತ್ರಿಕೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಚೆರ್ಕೂಡ್ಲು, ಸುವರ್ಣಸಂಭ್ರಮ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಎಡೆಪ್ಪಾಡಿ, ಅಗಲ್ಪಾಡಿ ವಲಯ ಸಮಿತಿ ಅಧ್ಯಕ್ಷ ವಾಸುದೇವ ಭಟ್ ಚೋಕೆಮೂಲೆ ಹಾಗೂ ಇನ್ನೂ ಕೆಲವು ಸದಸ್ಯರ ಸಮ್ಮುಖದಲ್ಲಿ ಅಗಲ್ಪಾಡಿ ದೇವಾಲಯದ ಅನುವಂಶಿಕ ಮೊಕ್ತೇಸರರಾದ ಶ್ರೀ ವಾಸುದೇವ ಭಟ್ ಉಪ್ಪಂಗಳ ಇವರು ಶ್ರೀ ದೇವಿಯ ಅನುಗ್ರಹ ಆಶೀರ್ವಾದಗಳೊಂದಿಗೆ ಬಿಡುಗಡೆ ಗೊಳಿಸಿದರು.

