
Event · April 10, 2025
ಕರಾಡ ವಿಶ್ವ ವೆಬಿನಾರ್ ಸರಣಿ -23
ದಿನಾಂಕ : 12/04/2025ರ ಶನಿವಾರ, ಸಂಜೆ 7.30ಕ್ಕೆ; ವಿಷಯ : ಶ್ರೀಮದ್ ರಾಮಾಯಣ ಸಂದೇಶ ; ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್ ಆವಳಮಠ
ಗೂಗಲ್ ಲಿಂಕ್: https://meet.google.com/jwo-yvyb-etc
ಕರಾಡ ವಿಶ್ವ ವೆಬಿನಾರ್ ಸರಣಿ ಕಾರ್ಯಕ್ರಮದ ಅಂಗವಾಗಿ 12/04/2025ರ ಶನಿವಾರ ಸಂಜೆ 7.30ಕ್ಕೆ ಶ್ರೀಮದ್ ರಾಮಾಯಣ ಸಂದೇಶ ಎನ್ನುವ ವಿಷಯದ ಕುರಿತು ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್ ಆವಳಮಠ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಮೇಲೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ನಿರ್ವಹಣೆ ಮತ್ತು ನಿತ್ಯ ಪಂಚಾಂಗ: ಶ್ರೀಮತಿ ಶ್ರುತಿ ಕೊಲ್ಲೆಂಕಾನ
ಪ್ರಾರ್ಥನೆ: ಕುಮಾರಿ ಅನನ್ಯ ಕಶೆಕೋಡಿ
ಸಂಪನ್ಮೂಲ ವ್ಯಕ್ತಿ ಪರಿಚಯ: ಶ್ರೀಮತಿ ಸುಧಾ ಕಶೆಕೋಡಿ
ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್
ವಿಷಯ: ಶ್ರೀಮದ್ ರಾಮಾಯಣ ಸಂದೇಶ
ಕರಾಡ ವಿಶ್ವ ಕುರಿತು: ಶ್ರೀ ಚಂದ್ರಹಾಸ ಕನ್ನಡ್ಕ
ಧನ್ಯವಾದ ಸಮರ್ಪಣೆ: ಶ್ರೀಮತಿ ಶ್ರುತಿ ಕೊಲ್ಲೆಂಕಾನ.
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ಗೀತಾ ಭಟ್ ಮತ್ತು ಪ್ರಭಾಕರ ಭಟ್ ನೇಜಿಕ್ಕಾರು, ಪಂಜಿಕುಂಜೆ ಇವರ ಪುತ್ರಿ.
* ಶ್ರೀಕೃಷ್ಣ ಭಟ್ ಆವಳಮಠ ಇವರ ಪತ್ನಿ. ಗೃಹಿಣಿ, ಮಂಗಳೂರು ನಿವಾಸಿ.
* ವಿದ್ಯಾಭ್ಯಾಸ - ಪದವಿ.
* ಆಧ್ಯಾತ್ಮ ಕ್ಷೇತ್ರದಲ್ಲಿ ಆಸಕ್ತಿ.
* ಅನೇಕ ಕಡೆಗಳಲ್ಲಿ ಶ್ರೀಮದ್ ರಾಮಾಯಣ, ಭಾಗವತ, ಮಹಾಭಾರತ, ಭಗವದ್ಗೀತಾ ಉಪನ್ಯಾಸಗಳನ್ನು ನೀಡಿದ ಅನುಭವ.
* ಸುಜ್ಞಾನ ಸಿಂಧು ಎಂಬ YouTube ವಾಹಿನಿಯಲ್ಲಿ ಇವರ ಆಧ್ಯಾತ್ಮ ಚಿಂತನೆಗಳು ಮೂಡಿ ಬರುತ್ತಿವೆ, ಆಸಕ್ತರಿಗೆ ವೀಕ್ಷಿಸಲು ಲಭ್ಯವಿವೆ.
* ಅಭಿಮತ ಟಿವಿ'ಯಲ್ಲಿ ಇವರ 'ಸಂಪೂರ್ಣ ರಾಮಾಯಣ ಚಿಂತನೆ' ಉಪನ್ಯಾಸ ಮಾಲಿಕೆ ಪ್ರಸಾರವಾಗಿದೆ.
* 60ಕ್ಕೂ ಹೆಚ್ಚು ಆಸಕ್ತರಿಗೆ ಭಗವದ್ಗೀತಾ ತರಗತಿಗಳನ್ನು, 80ಕ್ಕೂ ಅಧಿಕ ಆಸಕ್ತರಿಗೆ ರಾಮಾಯಣ ತರಗತಿ ನಡೆಸುತ್ತಿದ್ದಾರೆ.
